top of page

ಸಾಧಕನ ಹಿಂದೆಯೇ

ಸಾಧಕನ ಹಿಂದೆಯೇ

ಶತ್ರುಗಳು ಹುಟ್ಟುವರು

ಪ್ರತಿ ಗೆಲುವಿನ ಹಿಂದೆ ಸೋಲು

ಹೊಂಚು ಹಾಕಿ ಕಾದಿಹುದು


ರೆಪ್ಪೆ ಮುಚ್ಚದಾ ಕಂಗಳು

ಹದಕೆ ಬಾರದ ಎದೆ ಬಡಿತ

ತೋಯ್ದ ದಿಂಬು

ಕಂಪಿಸುವ ತುಟಿಗಳು


ಯಾವ ಕ್ಷಣದಲಿ ಏನಾಗುವುದೊ

ಎಂಬ ಅಪರಿಮಿತ ಭಯ

ಈ ನಡುವೆ ತೂರಿ ಬಹುದೆಂಬ

ಮಂದಸ್ಮಿತ ಚೆಲುವ ಕಿರಣ!


ಭರವಸೆಯೇ ಜೀವನ💕


ಸುವಿಧಾ ಹಡಿನಬಾಳ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page